"ಕೊಪ್ಪಳದ ನೀರ್ ಸಾಬ"

ಜನತೆಗೆ ಮೂಲಭೂತ ಅವಶ್ಯಕ ಕುಡಿಯುವ ನೀರಿನ ಸೇವೆ .. ಜನತೆ ಕೆ.ಎಂ.ಸಯ್ಯದ್ ರನ್ನು ಕರೆಯುವುದು "ಕೊಪ್ಪಳದ ನೀರ್ ಸಾಬ" ಎಂದು....ಪ್ರಥಮ ಬಾರಿಗೆ ಕೊಪ್ಪಳದ ಅಟೋಡ್ರೈವರ್ ಗಳಿಗೆ ಸಮವಸ್ತ್ರ ವಿತರಣೆ.... ಅವರಿಗಾಗಿ ಅಟೋ ಸ್ಟಾಂಡ್ ನಿರ್ಮಾಣ...ಯುವ ಪ್ರತಿಭೆಗಳ ಪ್ರೋತ್ಸಾಹಕ್ಕಾಗಿ ವಿವಿದ ಆಟೋಟಗಳ ಸ್ಪರ್ಧೆಗಳ ಆಯೋಜನೆ ಮತ್ತು ಪ್ರಾಯೋಜಕತ್ವ.....ವಿವಿದ ಸಂಘ ಸಂಸ್ಥೆಗಳಿಗೆ ಧನಸಹಾಯ... ಬಡ ಮಹಿಳೆಯರಿಗೆ ಸೀರೆ ವಿತರಣೆ...

Monday, April 22, 2013

ಕೆಜೆಪಿ ಪಕ್ಷದಿಂದ ನಾಡಿನ ಸಮಗ್ರ ಅಭಿವೃದ್ದಿ : ಸಯ್ಯದ್


ಕೊಪ್ಪಳ,ಏ.೧೫:ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಇದು ನಮ್ಮ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕೆಜೆಪಿ ಪಕ್ಷದಿಂದ ಮಾತ್ರ ಸಾಧ್ಯವಾಗಿದ್ದು, ಸಾಮಾಜಿಕ ನ್ಯಾಯ ಎತ್ತಿ ಹಿಡಿಯಲು ಮತ್ತು ಈ ನಾಡಿನ ಸಮಗ್ರ ಅಭಿವೃದ್ದಿಗೆ ಕೆಜೆಪಿಗೆ ಬೆಂಬಲಿಸಬೇಕೆಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್ ಹೇಳಿದರು.
ಅವರು ಕೊಪ್ಪಳ ತಾಲೂಕಿನ ಅಳವಂಡಿ ಹೋಬಳಿ ಮಟ್ಟದ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಿಗೆ ಭೇಟಿ ಮಾಡಿ ಮನೆಮನೆಗೆ ತೇರಳಿ ಮತಯಾಚನೆ ನಡೆಸಿದ ಬಳಿಕ ಅಳವಂಡಿ ಗ್ರಾಮದಲ್ಲಿ ಏರ್ಪಡಿಸಿದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ನಾಡಿನ ಜನಸಾಮಾನ್ಯರಿಗೆ ತಂದಿರುವ ಯೋಜನೆಗಳನ್ನು ಈ ನಾಡಿನ ಸಾರ್ವಜನಿಕರು ಮರೆಯುವುದಿಲ್ಲ. ಅವರ ಜನಪರ ಕಾರ್ಯಕ್ರಮಗಳೇ ಈ ಚುನಾವಣೆಯಲ್ಲಿ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್ ಹೇಳಿದರು. 
ಈ ಸಂದರ್ಭದಲ್ಲಿ ಮುಖಂಡ ನೇಮಿರಾಜ ಪಾಟೀಲ್, ಮಹೆಬೂಬ್ ಮುಲ್ಲಾ, ಶ್ಯಾಮೀದ್ ಸಾಬ ಕಿಲ್ಲೇದಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು. 

No comments:

Post a Comment